ಜಿಲ್ಲೆಯ ಬಾರ್ವಡಿ ಅರಣ್ಯ ಪ್ರದೇಶದಲ್ಲಿ ನಕ್ಸಲರು ಇರುವ ಬಗ್ಗೆ ಗುರುವಾರ ಮಾಹಿತಿ ಲಭ್ಯವಾಗಿತ್ತು. ಭದ್ರತಾ ಪಡೆಗಳು ತಕ್ಷಣ ಅರಣ್ಯವನ್ನು ಸುತ್ತುವರೆದರು. ನಂತರ ಶರಣಾಗುವಂತೆ ನಕ್ಸಲರಿಗೆ ಸೂಚಿಸಲಾಯಿತು. ಆದರೆ ನಕ್ಸಲರು ಭದ್ರತಾ ಪಡೆಗಳತ್ತ ಗುಂಡು ಹಾರಿಸಲು ಆರಂಭಿಸಿದರು. ಭದ್ರತಾ ಪಡೆಗಳು ಪ್ರತಿಯಾಗಿ ಗುಂಡು ಹಾರಿಸಿದರು ಎಂದು ಎಸ್ಪಿ ಕುಲದೀಪ್ ದ್ವಿವೇದಿ ಸುದ್ದಿ ಸಂಸ್ಥೆಗೆ ತಿಳಿಸಿದರು.