ಎಐಸಿಸಿ ತಂಡದಿಂದ ಪಕ್ಷವಿರೋಧಿ ಕಾಂಗ್ರೆಸ್ಸಿಗರ ನಡವಳಿಕೆ ವೀಕ್ಷಣೆ
ಹೈದರಾಬಾದ್, ಏ. 10- `ಕಾಂಗ್ರೆಸ್ಸಿಗರು ಅಕ್ರಮವಾಗಿ ನಡೆದು ಕೊಂಡಿರುವರೇ?' ಎಂಬುದನ್ನು ಪತ್ತೆ ಮಾಡಲು ಉಪಚುನಾವಣೆ ನಡೆಯಲಿರುವ ಎಲ್ಲ ಪಾರ್ಲಿಮೆಂಟರಿ ಹಾಗೂ ರಾಜ್ಯ ಶಾಸನ ಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಳುಹಿಸುವುದೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಡಿ. ಸಂಜೀವಯ್ಯನವರು ಇಂದು ಇಲ್ಲಿ ತಿಳಿಸಿದರು.