ರಾಜ್ಯಾಂಗ ತಿದ್ದುಪಡಿಗೆ ಮೇಲ್ಮನೆ ಅನುಮೋದನೆ
ಬೆಂಗಳೂರು, ಸೆ. 11– ನಾಡಿನ ಸಮಗ್ರತೆಯನ್ನು ಪ್ರಶ್ನಿಸದಂತೆ ತಡೆಯುವ ಮತ್ತು ಪಾರ್ಲಿಮೆಂಟ್ ಅಥವಾ ರಾಜ್ಯ ಶಾಸನ ಸಭೆಗಳಿಗೆ ಸ್ಪರ್ಧಿಸುವವರು ನಾಡಿನ ಬಗ್ಗೆ ತಮ್ಮ ನಿಷ್ಠೆಯನ್ನು ಸೂಚಿಸುವ ಪ್ರಮಾಣ ವಚನವನ್ನು ಸ್ವೀಕರಿಸುವುದಕ್ಕೆ ಸಂಬಂಧಿಸಿದ ರಾಜ್ಯಾಂಗಕ್ಕೆ ಪಾರ್ಲಿಮೆಂಟಿನ ತಿದ್ದುಪಡಿಯನ್ನು ಅನುಮೋದಿಸುವ ನಿರ್ಣಯವನ್ನು ಇಂದು ವಿಧಾನ ಪರಿಷತ್ತು ಅಂಗೀಕರಿಸಿತು.
ವಿಳಂಬವಿಲ್ಲದೆ ಬೊಕಾರೊ ಯೋಜನೆ ಕಾರ್ಯರೂಪಕ್ಕೆ
ನವದೆಹಲಿ, ಸೆ. 11– ಸರ್ಕಾರಿ ಕ್ಷೇತ್ರದ ಉದ್ಯಮವಾಗಿ ಬೊಕಾರೊ ಉಕ್ಕಿನ ಕಾರ್ಖಾನೆ ಸ್ಥಾಪನೆ ಕೆಲಸದಲ್ಲಿ ಸರ್ಕಾರವು ಹೆಚ್ಚು ವಿಳಂಬವಿಲ್ಲದೆ ತೊಡಗುವುದೆಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಶ್ರೀ ಸಿ. ಸುಬ್ರಹ್ಮಣ್ಯಂ ಇಂದು ಲೋಕಸಭೆಯಲ್ಲಿ ಭರವಸೆ ನೀಡಿದರು.