ತೆರಿಗೆ ತಪ್ಪಿಸುವವರ ಮೇಲೆ ಕ್ರಮ ಖಂಡಿತ
ನವದೆಹಲಿ, ಏ. 17 - ಯಾರೇ ಆಗಲಿ - ಅವರೆಷ್ಟೇ ದೊಡ್ಡವರಿದ್ದರೂ - ಲಂಚಕೋರರೆಂದು ಅಥವಾ ಸರ್ಕಾರಕ್ಕೆ ತೆರಿಗೆ ಕೊಡದಿದ್ದವರೆಂದು ಕಂಡುಬಂದಲ್ಲಿ ಅಂಥವರು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಅವಕಾಶ ಕೊಡುವುದಿಲ್ಲವೆಂದು ಹಣಕಾಸಿನ ಸಚಿವ ಶ್ರೀ ಮೊರಾರ್ಜಿ ದೇಸಾಯರು ಇಂದು ಲೋಕ ಸಭೆಗೆ ಭರವಸೆ ಕೊಟ್ಟರು.