`ಕಾಶ್ಮೀರಭಾವೈಕ್ಯದ ಸಂಕೇತ~
ಚಂದೀಘಡ, ಜು.18 -`ಕಾಶ್ಮೀರವು ನಮ್ಮ ಭಾವೈಕ್ಯದ ಸಂಕೇತ~ ಎಂದು ರಕ್ಷಣಾ ಸಚಿವ ಶ್ರೀ ವಿ. ಕೆ. ಕೃಷ್ಣಮೆನನ್ ಅವರು ಇಂದು ಇಲ್ಲಿ ತಿಳಿಸಿದರು.
ಪಂಜಾಬ್ ಸರ್ಕಾರದ ನೌಕರರನ್ನುದ್ದೇಶಿಸಿ ರಾಷ್ಟ್ರೀಯ ಸಂಘಟನೆ ಬಗ್ಗೆ ಮಾತನಾಡುತ್ತ `ದೇಶದ ಹಿಂದು, ಸಿಖ್, ಮುಸ್ಲಿಂ ಮತ್ತು ಕ್ರೈಸ್ತ ರಾಜ್ಯಗಳ ಸ್ಥಾಪನೆಗೆ ಅವಕಾಶವಿತ್ತರೆ ನಾವು ಉಳಿಯುವುದೇ ಇಲ್ಲ~ ಎಂದರು.
ಹೊಸ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಬಗ್ಗೆ ಕಂಠಿ
ಬೆಂಗಳೂರು, ಜು. 18 - ರಾಜ್ಯದಲ್ಲಿ ಈಚೆಗೆ ಸ್ಥಾಪನೆಯಾದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳೊಂದಿಗೆ ಸರಕಾರದ ಸಂಬಂಧವಿಲ್ಲವೆಂದು ಶಿಕ್ಷಣ ಸಚಿವ ಶ್ರೀ ಎಸ್. ಆರ್. ಕಂಠಿಯವರು ಇಂದು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.