ಅಷ್ಟಗ್ರಹ ಕಾರಣ ಪ್ರಳಯ,ಮತ್ತಿತರ ಭೀತಿ ನಿರಾಧಾರ
ಬೆಂಗಳೂರು, ಫೆ. 1 - 1962ರ ಫೆಬ್ರುವರಿ 3 ರಿಂದ 5ನೇ ತಾರೀಖಿನವರೆಗೆ ಸೇರುವ ಅಷ್ಟಗ್ರಹಕೂಟದ ಪರಿಣಾಮವಾಗಿ ಪ್ರಳಯ ಸಂಭವಿಸುವುದೆಂಬ ನಂಬಿಕೆ ಹಾಗೂ ಭೀತಿ ನಿರಾಧಾರವಾದುದೆಂದು ಅಂತರರಾಷ್ಟ್ರೀಯ ಪ್ರಖ್ಯಾತಿ ಪಡೆದಿರುವ ಜ್ಯೋತಿಷಿ ಪ್ರೊಫೆಸರ್ ಶ್ರೀ ಬಿ. ವಿ. ರಾಮನ್ ಅವರು ಸ್ಪಷ್ಟಪಡಿಸಿದರು.
ರೇಡಿಯೋ ಮೂಲಕಪಕ್ಷಗಳ ಪ್ರಚಾರ ರದ್ದು
ನವದೆಹಲಿ, ಫೆ. 1 - ಚುನಾವಣಾ ಪ್ರಸಾರ ಭಾಷಣಗಳಿಗಾಗಿ ನಿಶ್ಚಿತವಾಗಿದ್ದ ಕಾಲಾವಧಿಯ ಹಂಚಿಕೆ ಬಗ್ಗೆ ರಾಜಕೀಯ ಪಕ್ಷಗಳು ಒಂದು ಒಪ್ಪಂದಕ್ಕೆ ಬರದೇ ಹೋದದರಿಂದ ರೇಡಿಯೋ ಮೂಲಕ ಚುನಾವಣಾ ಪ್ರಚಾರ ಭಾಷಣಗಳ ಪ್ರಸಾರ ಯೋಜನೆಯನ್ನು ಕೈಬಿಡಲಾಗಿದೆ ಎಂದು ಚುನಾವಣಾ ಮಂಡಲಿಯು ಪ್ರಕಟಿಸಿದೆ.