ದೊಡ್ಡಬಳ್ಳಾಪುರ: ಗುಣಮಟ್ಟದ ಶಿಕ್ಷಣ ಅಗತ್ಯವಾಗಿದ್ದು, ಕೌಶಲ್ಯಗಳನ್ನು ರೂಢಿಸಿಕೊಳ್ಳದ ಹೊರತು ಇಂದಿನ ಸ್ಪರ್ಧಾಯುಗದಲ್ಲಿ ಬದುಕು ರೂಪಿಸಿಕೊಳ್ಳುವುದು ಕಷ್ಟವಾಗಲಿದೆ ಎಂದು ಪ್ರಾಧ್ಯಾಪಕ ಎನ್.ಶಿವರಾಮ ರೆಡ್ಡಿ ಹೇಳಿದರು.ನಗರದ ಎಂಎಸ್ವಿ. ಪಬ್ಲಿಕ್ ಶಾಲೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಕಾರ್ಯದರ್ಶಿ ಸುದಿ ಸುರೇಶ್ ಮಾತನಾಡಿ, ಶ್ರದ್ದೆ, ಪರಿಶ್ರಮಗಳು ವಿದ್ಯಾರ್ಥಿಗಳಿಗೆ ಮುಖ್ಯವಾಗಿದ್ದು, ಗುರು ಹಿರಿಯರ ಮಾರ್ಗದರ್ಶನಗಳನ್ನು ಪಾಲಿಸಿದರೆ ಯಶಸ್ಸು ಖಂಡಿತ ಎಂದರು.
ಕೆ.ಪಿ.ಎಸ್ ಎಂ.ಎಫ್ನ ನರಸೇಗೌಡ, ಶಿಕ್ಷಣ ಇಲಾಖೆಯ ವಿ.ಸತೀಶ್ ಶಾಲೆಯ ಗೌರವ ಅಧ್ಯಕ್ಷ ಎ.ಸುಬ್ರಹ್ಮಣ್ಯ, ಕಾರ್ಯದರ್ಶಿ ಮಂಜುಳಾ ಮುಂತಾದವರು ಹಾಜರಿದ್ದರು.ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ದೊಡ್ಡಬಳ್ಳಾಪುರ ಎಂ.ಎಸ್.ವಿ. ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಾಧ್ಯಾಪಕ ಎನ್.ಶಿವರಾಮ ರೆಡ್ಡಿ ಶಿಕ್ಷಣ ಇಲಾಖೆಯ ವಿ.ಸತೀಶ್ ಇತರರು ಭಾಗವಹಿಸಿದ್ದರು.