ಬೆಂಗಳೂರು: ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆ ಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಉತ್ತರ ಒಳನಾಡು, ಕರಾವಳಿಯಲ್ಲಿ ಒಣಹವೆ ಮುಂದುವರೆದಿದೆ. ಗುಲ್ಬರ್ಗದಲ್ಲಿ ಗರಿಷ್ಠ ಉಷ್ಣಾಂಶ 41.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಹುಲಿಯೂರುದುರ್ಗದಲ್ಲಿ 9 ಸೆಂ.ಮೀ.ಮಳೆಯಾಗಿದೆ.
ಬಸರಾಳು, ಮಳವಳ್ಳಿ 5, ಮಹಾದೇಶ್ವರ ಬೆಟ್ಟ, ಹೊನಕೆರೆ, ಮದ್ದೂರು, ಚಿಂತಾಮಣಿ 3, ಕೆ.ಆರ್.ನಗರ, ತಿ.ನರಸೀಪುರ, ಶ್ರೀರಂಗಪಟ್ಟಣ, ಮಂಡ್ಯ, ರಾಯಲ್ಪಾಡು, ಕೆ.ಜಿ.ಎಫ್, ನೆಲಮಂಗಲ, ಗೌರಿಬಿದನೂರು, ಕುಣಿಗಲ್ 2, ಯಳಂದೂರು, ಕೊಳ್ಳೆಗಾಲ, ಚನ್ನರಾಯಪಟ್ಟಣ, ಮಾಲೂರು, ಕನಕಪುರ, ಕೊರಟಗೆರೆಯಲ್ಲಿ ತಲಾ ಒಂದು ಸೆಂ.ಮೀ.ಮಳೆಯಾಗಿದೆ.
ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ, ಉತ್ತರ ಒಳನಾಡಿನ ಜ್ಲ್ಲಿಲೆಗಳಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.