`ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದು, ಗಾಂಧೀಜಿ ಮತ್ತು ಕಾಂಗ್ರೆಸ್ನಿಂದಲ್ಲ, ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಭಾರತೀಯ ರಾಷ್ಟ್ರೀಯ ಸೇನೆಯಿಂದ..~ ಎಂದು ಎಸ್.ಎಲ್.ಭೈರಪ್ಪನವರು ಪ್ರತಿಪಾದಿಸಿದ್ದಾರೆಂದು ವರದಿಯಾಗಿದೆ (ಪ್ರವಾ. ಜ.1).
ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಗಾಂಧೀಜಿ, ನೇತಾಜಿ, ಕಾಂಗ್ರೆಸ್, ಭಾರತೀಯ ರಾಷ್ಟ್ರೀಯ ಸೇನೆ ಮತ್ತು ಇನ್ನಿತರ ಲಕ್ಷಾಂತರ ಮಂದಿ ಭಾರತೀಯರ ಹಾಗೂ ನೂರಾರು ಸಂಘಟನೆಗಳ ಸಾಮೂಹಿಕ ಹೋರಾಟದಿಂದ ಎಂಬ ವಿಚಾರ ದೇಶದ ಸ್ವಾತಂತ್ರ್ಯಕ್ಕಾಗಿ ನಡೆದಿರುವ ಸುಮಾರು ಒಂದು ನೂರು ವರ್ಷ ಕಾಲದ ಹೋರಾಟದ ಕಥನವನ್ನು ಓದಿದವರೆಲ್ಲರಿಗೂ ಮನದಟ್ಟಾಗುತ್ತದೆ.