ರಾಂಚಿ (ಐಎಎನ್ಎಸ್): ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಗೆಲ್ಲಬೇಕು ಎಂದು ನಾಯಕ ದೋನಿ ದೇವರಲ್ಲಿ ದುರ್ಗಾದೇವಿ ಯಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ.
ಶನಿವಾರ ಅವರು ರಾಂಚಿ ಸಮೀಪ ವಿರುವ ದಿವೊರಿ ಗ್ರಾಮದ ಹತ್ತಿರ ವಿರುವ ದುರ್ಗಾ ದೇವಸ್ಥಾನಕ್ಕೆ ನೀಡಿ ‘ಭಾರತ ತಂಡ ವಿಶ್ವಕಪ್’ನಲ್ಲಿ ಪ್ರಶಸ್ತಿ ಗೆಲ್ಲಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ವಿಶ್ವಕಪ್ಗೆ ಇನ್ನೂ 13 ದಿನ ಬಾಕಿ ಇರುವುದರಿಂದ ರಾಂಚಿಯಲ್ಲಿ ನಡೆಯುವ 34ನೇ ರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನಾ ಹಾಗೂ ಮುಕ್ತಾಯ ಸಮಾರಂಭ ದಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನುವುದನ್ನು ಸಹ ದೋನಿ ತಿಳಿಸಿದರು.