ಕೆಲ ದಿನಗಳ ಹಿಂದೆ ಮೂಟೆಗಳನ್ನು ಖರೀದಿಸಿದ್ದ ತಿಪ್ಪೇನಹಳ್ಳಿಯ ರೈತರೊಬ್ಬರು ಮಾರಾಟ ಮಳಿಗೆ ಮಾಲೀಕರನ್ನು ಪ್ರಶ್ನಿಸಿದಾಗ, ಯಾವುದೇ ಮಾಹಿತಿ ನೀಡದೇ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ. ಇತಮಾಕಲಹಳ್ಳಿ, ಅಜ್ಜವಾರ ಮುಂತಾದ ಗ್ರಾಮಗಳ ರೈತರು ಮೂಟೆಗಳನ್ನು ಖರೀದಿಸಿದಾಗಲೂ ಮರಳಿನ ಪ್ರಮಾಣವೇ ಹೆಚ್ಚು ಕಂಡು ಬಂತು ಎಂದು ಅವರು ತಿಳಿಸಿದರು.
ಸ್ಥಳಕ್ಕೆ ಬಂದ ಕೃಷಿ ಇಲಾಖೆ ಅಧಿಕಾರಿ ವಿಜಯ್ ಅವರು ಮೂಟೆಗಳನ್ನು ಪರಿಶೀಲಿಸಿ, 140 ಮೂಟೆಗಳನ್ನು ವಶಪಡಿಸಿಕೊಂಡರು. ಮೂಟೆಗಳನ್ನು ಪರೀಕ್ಷಿಸಲು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು. ರೈತ ಮುಖಂಡರಾದ ಮಂಜುನಾಥ್, ವೆಂಕಟರವಣಪ್ಪ, ಗಂಗಾಧರ್, ಕೇಶವ, ಟಿ.ಮುನಿಕೆಂಪಣ್ಣ, ರಾಮಕೃಷ್ಣ, ಮೂರ್ತಿ ಭಾಗವಹಿಸಿದ್ದರು.