`ವಿಜ್ಞಾನ ವಿಶೇಷ~ ಅಂಕಣದಲ್ಲಿ ಅಂಕಣಕಾರ ನಾಗೇಶ್ ಹೆಗಡೆಯವರು ಕೋಲ್ಕತ್ತಾದ ಎಳೆಯರ ಅಂಗವಿಕಲತೆಗೆ ಬಿಹಾರದ ರಾಂಚಿ ಬಳಿಯ ಜಾದೂಗುಡ ಯುರೇನಿಯಂ ಗಣಿಗಾರಿಕೆ ಕಾರಣವಾಗಿರುವುದನ್ನು ಉಲ್ಲೇಖಿಸಿ ಗುಲ್ಬರ್ಗ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ (ಈಗ ಯಾದಗಿರಿ ಜಿಲ್ಲೆಯಲ್ಲಿ) ಗ್ರಾಮಕ್ಕೆ ಎರಗಬಹುದಾದ ಅಪಾಯ (ಕ್ಯಾನ್ಸರ್)ದ ಬಗ್ಗೆ, ಗುಲ್ಬರ್ಗಾದ ಕ್ಯಾನ್ಸರ್ ಆಸ್ಪತ್ರೆ ಮುಚ್ಚುವಂಥ ಮಟ್ಟಕ್ಕೆ ಬಂದಿರುವ ಸ್ಥಿತಿಯ ಬಗ್ಗೆ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯತೆಯ ಬಗ್ಗೆ ಯಾದಗಿರಿ ಮತ್ತು ಗುಲ್ಬರ್ಗ ಜಿಲ್ಲೆಗಳ ಜನರನ್ನು ಎಚ್ಚರಿಸಿದ್ದಾರೆ.
ಅದಕ್ಕಾಗಿ ಅವರಿಗೆ ಕೃತಜ್ಞತೆಗಳು.ಗೋಗಿ ಗ್ರಾಮ ಮತ್ತೊಂದು ಜಾದೂಗುಡ ಆಗದಿರಲು ಆ ಗ್ರಾಮದ ಜನರು ಎಚ್ಚೆತ್ತುಕೊಳ್ಳಬೇಕು.