ಬೆಂಗಳೂರು: ಗೃಹ ರಕ್ಷಕ ಮತ್ತು ಅಗ್ನಿಶಾಮಕ ದಳದ ಐಜಿಪಿ ಗೋಪಾಲ್ ಬಿ.ಹೊಸೂರು ಅವರ ಸ್ವಯಂ ನಿವೃತ್ತಿಗೆ ರಾಜ್ಯ ಸರ್ಕಾರ ಶುಕ್ರವಾರ ಒಪ್ಪಿಗೆ ಸೂಚಿಸಿದೆ.
ಇದೇ 31ರಿಂದ ಜಾರಿಗೆ ಬರುವಂತೆ ಅವರು ಸೇವೆಯಿಂದ ನಿವೃತ್ತಿಯಾಗ ಬಹುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ. 2014ರ ಮಾರ್ಚ್ಗೆ ಅವರು ನಿವೃತ್ತರಾಗ ಲಿದ್ದರು. ಆದರೆ ಕಾರಣಾಂತರದಿಂದ ಎರಡು ತಿಂಗಳ ಹಿಂದೆಯೇ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು.