ಡಾರ್ಜಿಲಿಂಗ್ (ಪಿಟಿಐ): ಗೋರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯ ರಚನೆಗೆ ಒತ್ತಾಯಿಸಿ `ಗೋರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ನೀಡಿರುವ ಬಂದ್ ಕರೆಗೆ ಪಶ್ಚಿಮ ಬಂಗಾಳದ ಈ ಪರ್ವತ ಪ್ರದೇಶದಲ್ಲಿ ಶನಿವಾರ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.
ಅಂಗಡಿ-ಮುಂಗಟ್ಟುಗಳು, ಮಾರುಕಟ್ಟೆ, ಶೈಕ್ಷಣಿಕ ಸಂಸ್ಥೆಗಳು, ಸರ್ಕಾರಿ-ಖಾಸಗಿ ಕಚೇರಿಗಳು, ಬ್ಯಾಂಕ್ಗಳು ಮುಚ್ಚಿದ್ದವು. ವಾಹನಗಳ ಸಂಚಾರ ಇರಲಿಲ್ಲ. ಹೊಸದಾಗಿ ಎಲ್ಲೂ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿಲ್ಲ.
ಆದರೆ ಜಿಜೆಎಂ ಕಾರ್ಯಕರ್ತರು ರಾಮಂ ಮತ್ತು ರಿಂಬಿಕ್ ನಿಪ್ಪೊನ್ ಜಲ ವಿದ್ಯುತ್ ಯೋಜನಾ ಘಟಕವನ್ನು ಬಲವಂತದಿಂದ ಮುಚ್ಚಿಸಿದರು. ಈ ಮಧ್ಯೆ, ನವದೆಹಲಿಯಲ್ಲಿರುವ ಜಿಜೆಎಂನ ನಿಯೋಗವು ಸಂಸದರನ್ನು ಭೇಟಿ ಮಾಡಿ ಅಧಿವೇಶನದಲ್ಲಿ ಗೋರ್ಖಾಲ್ಯಾಂಡ್ ರಚನೆ ಬಗ್ಗೆ ಧ್ವನಿ ಎತ್ತುವಂತೆ ಕೋರಿದೆ.