ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋರ್ಟಾದಲ್ಲಿ ರೈತ ಆತ್ಮಹತ್ಯೆ

Last Updated 13 ಜೂನ್ 2011, 19:30 IST
ಅಕ್ಷರ ಗಾತ್ರ

ಬಸವಕಲ್ಯಾಣ (ಬೀದರ್ ಜಿಲ್ಲೆ): ಸಾಲದ ಬಾಧೆ ತಾಳದೆ ರೈತನೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಗೋರ್ಟಾ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಮೃತ ರೈತನನ್ನು ರಾಜಕುಮಾರ ಸಿದ್ರಾಮಪ್ಪ ನಾಗೂರೆ (38) ಎಂದು ಗುರುತಿಸಲಾಗಿದೆ. ಇವರ ಹೆಸರಲ್ಲಿ 6 ಎಕರೆ ಜಮೀನು ಇದ್ದು, ಸಾಲ ಮಾಡಿದ್ದರಿಂದ ಕಳೆದ ವರ್ಷ ಎತ್ತುಗಳನ್ನು ಮಾರಾಟ ಮಾಡಿದ್ದರು  ಎನ್ನಲಾಗಿದೆ.
 
ಆದರೂ 2 ಲಕ್ಷ ರೂಪಾಯಿ ಸಾಲ ಕೊಡುವುದು ಬಾಕಿ ಉಳಿದಿತ್ತು. ಹೀಗಾಗಿ ಹಣ ಕೊಟ್ಟವರ ಕಾಟ ಹೆಚ್ಚಾಗಿದ್ದರಿಂದ ಈತ ಆತ್ಮಹತ್ಯೆಗೆ ಶರಣಾದುದಾಗಿ ತಿಳಿದುಬಂದಿದೆ. ಈ ಸಂಬಂಧ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT