ಕಡಬ (ಉಪ್ಪಿನಂಗಡಿ): ಕೊಂಬಾರು, ಸಿರಿಬಾಗಿಲು ಅರಣ್ಯ ಸಮಿತಿ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಗೊಂದಲ ಏರ್ಪಟ್ಟು, ಗ್ರಾಮಸ್ಥರೊಳಗೆ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಒಮ್ಮತಕ್ಕೆ ಬರಲು ಸಭೆ ವಿಫಲವಾಗಿ ಅಧಿಕಾರಿಗಳು ಸಭೆಯನ್ನು ಮುಂದೂಡಿದ ಘಟನೆ ಶನಿವಾರ ಕೆಂಜಾಳದಲ್ಲಿ ನಡೆಯಿತು.
ವಿಭಾಗೀಯ ಅರಣ್ಯ ಸಂರಕ್ಷಣಾಧಿ ಕಾರಿ ದಿನೇಶ್ ಕುಮಾರ್, ವಲಯಾರ ಣ್ಯಧಿಕಾರಿ ಬಾಲಕೃಷ್ಣ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಘಟನೆ ನಡೆಯಿತು. ಸಭೆ ಆರಂಭಗೊಂಡು ನೂತನ ಸಮಿತಿ ರಚಿಸಲು ಅಧ್ಯಕ್ಷ ಹುದ್ದೆಗೆ ಗ್ರಾಮಸ್ಥರ ಹೆಸರನ್ನು ಸೂಚಿಸುವಂತೆ ವಿಭಾಗೀಯ ಅರಣ್ಯಾಧಿಕಾರಿ ಹೇಳಿದರು. ಆಗ ಹಾಲಿ ಅಧ್ಯಕ್ಷ ಬಾಲಕೃಷ್ಣ ಮತ್ತು ಆನಂದ ಮಿತ್ತಬೈಲು ಹಾಗೂ ಪುರುಷೋತ್ತಮ ದೇರಣೆಯವರ ಹೆಸರನ್ನು ಸಭೆಯಲ್ಲಿ ಸೂಚಿಸಲಾಯಿತು. ಇದಕ್ಕೆ ಅರಣ್ಯಾಧಿಕಾರಿಯವರು ಅಧ್ಯಕ್ಷ ಹುದ್ದೆ ಒಂದು ಮಾತ್ರ ಇರುವುದು.