ಚೆನ್ನೈ (ಪಿಟಿಐ): `ಇಷ್ಟು ದಿನ ಅಪರಿಚಿತನಾಗಿದ್ದ ನಾನೀಗ `ಪರಿಚಿತ ಯೋಧ~ನಾಗಿ ಹೊರಹೊಮ್ಮಿರುವೆ. ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮಾದರಿ ವ್ಯಕ್ತಿ ಎನಿಸಿಕೊಳ್ಳುವ ಮಹದಾಸೆ ನನ್ನದು~.
ಈ ಬಾರಿಯ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆಯಾದ ವಿಶ್ವದ ವಿವಿಧ ಕ್ಷೇತ್ರಗಳ ಆರು ಜನರ ಪೈಕಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕುಳಂದೈ ಫ್ರಾನ್ಸಿಸ್ ಅವರ ಮನದಾಳದ ಮಾತುಗಳಿವು. `ಈ ಪ್ರಶಸ್ತಿ ನಿಜಕ್ಕೂ ನನಗೆ ಆಶ್ಚರ್ಯ ತಂದಿದ್ದು ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆಗಳಲ್ಲಿ ಮತ್ತಷ್ಟು ಜನರನ್ನು ತೊಡಗಿಸಲು ಪ್ರೇರಣೆ ನೀಡಿದಂತಾಗಿದೆ~ ಎಂದಿದ್ದಾರೆ.