ಹೊಳಲ್ಕೆರೆ: ಸಾರ್ವಜನಿಕ ಶಿಕ್ಷಣ ಇಲಾಖೆ, ಡಿಎಸ್ಇಆರ್ಟಿ ಮತ್ತು ಅನಾಥ ಸೇವಾಶ್ರಮ ವಿಶ್ವಸ್ಥ ಸಮಿತಿಗಳ ಆಶ್ರಯದಲ್ಲಿ ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ಜ. 19 ರಿಂದ ಹಿರಿಯ ಪ್ರಾಥಮಿಕ ಶಾಲೆಗಳ ದೈಹಿಕ ಶಿಕ್ಷಕರಿಗಾಗಿ ರಾಜ್ಯಮಟ್ಟದ ಎಂಆರ್ಪಿ (ಮಾಸ್ಟರ್ ರಿಸೋರ್ಸ್ ಪರ್ಸನಾಲಿಟಿ) ತರಬೇತಿ ನಡೆಯಲಿದೆ.
ಬೆಂಗಳೂರು, ಮೈಸೂರು, ಗುಲ್ಬರ್ಗಾ ಮತ್ತು ಬೆಳಗಾವಿ ವಿಭಾಗಗಳಿಂದ 70 ದೈಹಿಕ ಶಿಕ್ಷಕರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, ಅಥ್ಲೆಟಿಕ್ಸ್, ಪರೇಡ್, ಏರೋಬಿಕ್ಸ್, ಯೋಗ ಮತ್ತಿತರ ವಿಷಯಗಳ ಕುರಿತು ಉಪನ್ಯಾಸ, ಪ್ರಾತ್ಯಕ್ಷಿಕೆಗಳು ನಡೆಯಲಿವೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.