`ಬೆಂಗಳೂರಿನ ಕ್ಯಾಥೋಲಿಕ್ ಮುಖ್ಯ ಧರ್ಮಗುರುಗಳ ಗಮನಕ್ಕೆ ತರದೇ ಕನ್ನಡ ಬಿಟ್ಟು, ಬೇರೆ ಭಾಷೆಯಲ್ಲಿ ಪ್ರಾರ್ಥನೆ ನಡೆಸುವಂತಿಲ್ಲ. ಪೂಜಾ ವಿಧಾನವನ್ನು ಬದಲಾವಣೆ ಮಾಡುವ ಮುನ್ನವೂ ಧರ್ಮಗುರುಗಳ ಗಮನಕ್ಕೆ ತರಬೇಕು. ಆದರೆ, ಈ ಚರ್ಚ್ಗಳಲ್ಲಿ ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮುಂದಿನ ದಿನಗಳಲ್ಲಿ ಚರ್ಚ್ನ ಮುಖ್ಯಸ್ಥರು ಕನ್ನಡ ವಿರೋಧಿ ನೀತಿಯನ್ನು ಕೈಬಿಡದೇ ಹೋದರೆ, ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು' ಎಂದು ಅವರು ಎಚ್ಚರಿಸಿದರು.