ಮುಂಬೈ (ಪಿಟಿಐ): ಆದರ್ಶ ಹೌಸಿಂಗ್ ಸೊಸೈಟಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರ ಸಲ್ಲಿಸಲು ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರಿಗೆ ವಿಚಾರಣಾ ಆಯೋಗವು ಜೂನ್ 20ರ ವರೆಗೆ ಕಾಲಾವಕಾಶ ನೀಡಿದೆ.
ಚವಾಣ್ ಕಂದಾಯ ಸಚಿವರಾಗಿದ್ದಾಗ ಸೊಸೈಟಿಗೆ ಸಂಬಂಧಿಸಿದಂತೆ ಮಾಡಿರುವ ಕಡತ ವಿಲೇವಾರಿಯ ಬಗ್ಗೆ ಅವರಿಗೆ ಪ್ರಮಾಣಪತ್ರ ಸಲ್ಲಿಸುವಂತೆ ಆಯೋಗವು ಕಳೆದ ಮೇ 10ರಂದು ಸೂಚಿಸಿತ್ತು. ಆದರೆ ಚವಾಣ್ ಹೆಚ್ಚಿನ ಕಾಲಾವಕಾಶ ಕೋರಿದ್ದರು. ಆಯೋಗವು ಅವರ ಕೋರಿಕೆಯನ್ನು ಮನ್ನಿಸಿ, ಜೂನ್ 20ರ ವರೆಗೆ ಅವಕಾಶ ನೀಡಿದೆ.