ನಗರದ ಎನ್.ಆರ್.ಚೌಕದ ಬಳಿ 2010ರ ಡಿ.20ರಂದು ಈ ಅಪಘಾತ ಸಂಭವಿಸಿತ್ತು. ಮಹಂತಯ್ಯ, ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ) ಹಿರಿಯ ವ್ಯವಸ್ಥಾಪಕ ಎಚ್.ವೈ.ಮಹೇಶ್ (58) ಎಂಬುವರಿಗೆ ಹಿಂದಿನಿಂದ ವಾಹನ ಗುದ್ದಿಸಿದ್ದರು. ಕೆಳಗೆ ಬಿದ್ದ ಮಹೇಶ್ ಅವರ ಮೇಲೆ ಬಸ್ನ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದರು.