ನೆಟ್ಟ ಕಣ್ಣು ಅತ್ತಿತ್ತಲಾಗುತ್ತಿರಲಿಲ್ಲ. ಎದುರಲ್ಲಿದ್ದ ಕ್ಯಾನ್ವಾಸ್ ಮೇಲೆ ಪುಟ್ಟ ಕೈಗಳು ಆಡುತ್ತಿದ್ದವು. ತಾವು ಕಂಡ ಟ್ರಾಫಿಕ್ ಕಿರಿಕಿರಿಯನ್ನು ಚಿಣ್ಣರು ತಮ್ಮದೇ ಕಲ್ಪನೆಯಲ್ಲಿ ಅರಳಿಸಿದರು. ಅವರು ಚಿತ್ರ ಬಿಡಿಸುವ ರೀತಿಯನ್ನು ನೋಡಲು ನಟಿ ರೂಪಿಕಾ ಒಂದಿಷ್ಟು ಹೊತ್ತು ಅಲ್ಲಿದ್ದರು.
ಬೆಂಗಳೂರು ಪೊಲೀಸರು `ರಸ್ತೆ ಸುರಕ್ಷತಾ ವಾರ' ಕಾರ್ಯಕ್ರಮದ ಭಾಗವಾಗಿ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಇತ್ತೀಚೆಗೆ ಏರ್ಪಡಿಸಿದ್ದರು. ಕಬ್ಬನ್ ಪಾರ್ಕ್ನಲ್ಲಿ ಆ ದಿನ ಮಕ್ಕಳದ್ದೇ ಬಣ್ಣದಾಟ. ಸ್ಪರ್ಧೆಗೆ ಅನಿಲ್ ಕುಂಬ್ಳೆ ಚಾಲನೆ ನೀಡಿದರು. ನಗರದ ಟ್ರಾಫಿಕ್ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ವಿವಿಧ ಚಿತ್ರಗಳನ್ನು ಮಕ್ಕಳು ಬಿಡಿಸಿದರು.