ಈ ಹಿನ್ನೆಲೆಯಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಮತ್ತು ಮೂಲಸೌಕರ್ಯ ಕಲ್ಪಿಸಲು ಚಿತ್ರಕಲಾ ಶಾಲೆಗಳಿಗೆ ಪ್ರತ್ಯೇಕ ವಿವಿ ಸ್ಥಾಪಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು. ‘ಕಲೆ ಒಂದು ಅಭಿವ್ಯಕ್ತಿ ಮಾಧ್ಯಮ. ಕಲಾವಿದ ತನ್ನೊಳಗಿನ ತುಡಿತಗಳನ್ನು ಅನುಕೂಲಕರ ಮಾಧ್ಯಮದ ಮೂಲಕ ಅಭಿವ್ಯಕ್ತಿ ಪಡಿಸುತ್ತಾನೆ. ಅದೇ ರೀತಿ, ಸಾಹಿತಿಯಾದವನು ಕತೆ, ಕಾದಂಬರಿ, ಕವನಗಳ ಮೂಲಕ ಅಭಿವ್ಯಕ್ತಿ ಪಡಿಸುತ್ತಾನೆ. ಇಲ್ಲಿ ಹಲವಾರು ಬಣ್ಣಗಳ ಮೇಳೈಕೆಯಿಂದ ಬೇರೆ, ಬೇರೆ ಅರ್ಥಗಳಿರುವ ಚಿತ್ರಗಳು ಹೊರಹೊಮ್ಮುತ್ತವೆ. ಚಿತ್ರಗಳನ್ನು ನೋಡಿದರೆ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಹುದು’ ಎಂದು ಹೇಳಿದರು.