ಸೋಮವಾರ, 6-2-1962
ಚೀಣ ಹಿಮ್ಮೆಟ್ಟದಿದ್ದರೆ ಗೋವ ಕ್ರಮದ ಪುನರಾವೃತ್ತಿ
ರಾಯಪುರ, ಫೆ. 5- ಭಾರತದ ಉತ್ತರ ಗಡಿಯಲ್ಲಿ ಭಾರತ ನೆಲದ ಮೇಲೆ ಚೀಣ ನಡೆಸಿರುವ ಅತಿಕ್ರಮಣವನ್ನು ಬಿಟ್ಟುಕೊಡದಿದ್ದರೆ, ಗೋವದಲ್ಲಿ ಕೈಗೊಂಡ ಕ್ರಮವನ್ನೇ ಅಲ್ಲಿಯೂ ಕೈಗೊಳ್ಳಲು ಭಾರತ ಹಿಂದುಮುಂದು ನೋಡುವುದಿಲ್ಲವೆಂದು ಕೇಂದ್ರ ಗೃಹ ಸಚಿವ ಶ್ರಿ ಲಾಲ್ಬಹದ್ದೂರ್ ಶಾಸ್ತ್ರಿಯವರು ನಿನ್ನೆ ರಾತ್ರಿ ಇಲ್ಲಿ ಘೋಷಿಸಿದರು.