ಬೀಜಿಂಗ್ (ಪಿಟಿಐ): ಭಾರತ ಎರಡನೇ ಬಾರಿ ‘ಅಗ್ನಿ–5’ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ನಡೆಸಿರುವುದಕ್ಕೆ ಸಂಯಮದ ಪ್ರತಿಕ್ರಿಯೆ ನೀಡಿರುವ ಚೀನಾ, ಪರಸ್ಪರ ವಿಶ್ವಾಸ ವರ್ಧಿಸಲು ಉಭಯ ಬಣಗಳು ಯತ್ನಿಸಬೇಕು ಎಂದು ಅಭಿಪ್ರಾಯಪಟ್ಟಿದೆ.
ದ್ವಿಪಕ್ಷೀಯ ಬಾಂಧವ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಸಹ ಮಹತ್ವದ ಪಾತ್ರ ವಹಿಸಬೇಕಿದೆ ಎಂದು ಅದು ಹೇಳಿದೆ.