‘ನಮ್ಮ ಸೈನ್ಯದ ಸಾಮರ್ಥ್ಯವನ್ನು ಮತ್ತು ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಈಗಾಗಲೇ ಕೆಲಸ ಪ್ರಾರಂಭಿಸಿದ್ದು, ಭಾರತ ಸರ್ಕಾರವು ಸಹ ತನ್ನ ಸೈನ್ಯವನ್ನು ಆಧುನೀಕರಣಗೋಳಿಸುತ್ತಿದೆ. ಯಾವುದೇ ಭಾಗದಿಂದ ಎದುರಾಗುವ ಸವಾಲನ್ನು ಎದುರಿಸಲು ಸಾಧ್ಯವಾಗುವಂತೆ ಗಡಿಭಾಗದಲ್ಲಿರುವ ಸೈನ್ಯವನ್ನು ಬಲಿಷ್ಠಗೊಳಿಸಲಾಗುವುದು’ ಎಂದು ಅವರು ತಿಳಿಸಿದರು.
ನಾವು ಸದಾಕಾಲ ಸೈನ್ಯದ ಆಧುನೀಕರಣವನ್ನು ಪರಿಶೀಲಿಸುತ್ತಿದ್ದು, ಅದರಲ್ಲಿ ಕಂಡ್ಗುರುವ ಕೊರತೆಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ ಜತೆಗೆ ಸದಾಕಾಲ ಸೈನ್ಯವನ್ನು ಎಚ್ಚರದಿಂದಿಡುವ ಅಗತ್ಯವಿದೆ ಎಂದು ಆಂಟನಿ ತಿಳಿಸಿದರು.
ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಚೀನಾ-ಭಾರತ ಗಡಿ ಸಮಸ್ಯೆ ಕುರಿತು ಆಂಟನಿ ‘ಗಡಿ ಸಮಸ್ಯೆಯು ಸಂಕೀರ್ಣ ವಿಷಯವಾಗಿದ್ದು, ಅದು ಕೇವಲ ಮಾತುಕತೆ ಮತ್ತು ಚರ್ಚೆಗಳ ಮೂಲಕ ್ಗಗೆಹರಿಯುವಂತಹದು’ಎಂದರು.