ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ತಂಡ ಸೋಮವಾರದ ಪಂದ್ಯದಲ್ಲಿ 3-1ರಲ್ಲಿ ಡಿವೈಎಸ್ಎಸ್ ತಂಡವನ್ನು ಸೋಲಿಸಿತು. ಇದರಿಂದ ಎಂಇಜಿ ದ್ವಿತೀಯ ಸ್ಥಾನ ಗಳಿಸಿ 20,000 ರೂ. ಬಹುಮಾನ ಪಡೆಯಿತು.
ಮಲ್ಲೇಶ್ವರದ ಕೋದಂಡರಾಮಪುರ ಮೈದಾನದಲ್ಲಿ ಇತರ ಪಂದ್ಯಗಳಲ್ಲಿ ಭಾರತೀಯ ಜೀವ ವಿಮಾ ನಿಗಮ 3-1ರಲ್ಲಿ ಕರ್ನಾಟಕ ಪೊಲೀಸ್ ತಂಡವನ್ನು ಮಣಿಸಿತು. ಭಾರತ ಸಂಚಾರ ನಿಗಮ ನಿಯಮಿತ ತಂಡವು 3-2ರಲ್ಲಿ ಎಎಸ್ಸಿ ವಿರುದ್ಧ ಜಯ ಸಾಧಿಸಿತು.