ಅಣ್ಣಾ ಹಜಾರೆ ಮತ್ತು ತಂಡದ ಸದಸ್ಯರಾದ ಸಂತೋಷ್ ಹೆಗ್ಡೆ, ಪ್ರಶಾಂತ್ ಭೂಷಣ್, ಅರವಿಂದ ಕೇಜ್ರಿವಾಲ್ ಮತ್ತು ಕಿರಣ್ ಬೇಡಿ ಅವರು ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಅವರೊಂದಿಗೆ ಒಂದು ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದರು. ಮಾತುಕತೆ ತುಂಬಾ ಫಲಪ್ರದವಾಗಿತ್ತು. ತಮ್ಮ ಯೋಚನೆಗಳನ್ನು ಮತ್ತು ಬೇಡಿಕೆಗಳನ್ನು ಚುನಾವಣಾ ಆಯೋಗ ಸೂಕ್ಷ್ಮವಾಗಿ ಗ್ರಹಿಸಿರುವುದಾಗಿ ಅಣ್ಣಾ ತಂಡ ಹೇಳಿದೆ.