ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ

ನೀರು ಪೂರೈಕೆ ಸ್ಥಗಿತಕ್ಕೆ ಚೀರನಹಳ್ಳಿ ಗ್ರಾ.ಪಂ. ಮುಂದೆ ಧರಣಿ
Last Updated 7 ಏಪ್ರಿಲ್ 2014, 5:51 IST
ಅಕ್ಷರ ಗಾತ್ರ

ಅಜ್ಜಂಪುರ: ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಪಟ್ಟಣ ಸಮೀಪದ ಚೀರನಹಳ್ಳಿ ಗ್ರಾಮ­ಸ್ಥರು ಖಾಲಿ ಕೊಡ ಹಿಡಿದು ಗ್ರಾಮ ಪಂಚಾಯಿತಿ ಮುಂದೆ ಶನಿವಾರ ಪ್ರತಿಭಟಿಸಿದರು.

500ಕ್ಕೂ ಅಧಿಕ ಮನೆ, 2000ಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದಲೂ ಕುಡಿಯುವ ನೀರಿನ ಸಮಸ್ಯೆ ತಲೆ­ದೋರಿದೆ. ನೀರಿನ ಬವಣೆಗೆ ಸಿಲುಕಿ­ರುವ ಮಹಿಳೆಯರು ಮಕ್ಕಳೊಂದಿಗೆ ಬಿಂದಿಗೆ ಹಿಡಿದು ದೂರದ ತೋಟದ ಕೊಳವೆ ಬಾವಿಗಳತ್ತ ತೆರಳಿ ನೀರು ತರುವುದು ಸಾಮಾನ್ಯವಾಗಿದೆ. ನಾಲ್ಕಾರು ಕಿಲೋ ಮೀಟರ್‌ ದೂರದ ಕೆರೆ­ಕಟ್ಟೆಗಳಿಗೆ ಜಾನುವಾರುಗಳನ್ನು ಕೊಂಡೊ­ಯ್ಯುವ ಅನಿವಾರ್ಯತೆ ಒದಗಿದೆ. ನೀರಿನ ಕೊರತೆಯಿಂದ ಸಿಗುವ ಅಶುದ್ದ ನೀರನ್ನೇ ಕುಡಿಯುವ ಗ್ರಾಮಸ್ಥರಲ್ಲಿ ಹಾಗೂ ನೈರ್ಮಲ್ಯದ ಸಮಸ್ಯೆಯೂ ಉಂಟಾಗಿರುವ ಗ್ರಾಮ­ದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಕಾಡುತ್ತಿದೆ.

ಕಳೆದೆರಡು ವರ್ಷದಿಂದಲೂ ತಲೆ­ದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾ.­ಪಂ. ಅಧ್ಯಕ್ಷರು, ಶಾಸ­ಕರು, ತಹಶೀ­ಲ್ದಾರ್‌, ಜಿಲ್ಲಾಧಿಕಾ­ರಿಗೂ ಮನವಿ ಮಾಡಲಾಗಿದೆ. ಆದರೆ ಗ್ರಾಮದ ನೀರಿನ ಸಮಸ್ಯೆಯ ತೀವ್ರತೆ­ಯನ್ನು ಹಗುರವಾಗಿ ಪರಿಗಣಿಸಿರುವ ಅಧಿಕಾರಿ­ಗಳು ಹಾಗೂ ಜನಪ್ರತಿ­ನಿಧಿ­ಗಳು ಶಾಶ್ವ­ತ­ವಾಗಿ ಸಮಸ್ಯೆ ಪರಿಹರಿ­ಸಲು ಮುಂದಾ­ಗಿಲ್ಲ. ಸಮಸ್ಯೆ ಹೀಗೆ ಮುಂದು­ವರೆದರೆ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸ­ಲಾಗಿದೆ ಎಂದು ಗ್ರಾಮದ ವಿಜಯ್‌­ಕುಮಾರ್‌, ಪರ­ಮೇ­ಶ್ವರಪ್ಪ, ನಿಂಗ­ದಾಸಪ್ಪ ತಿಳಿಸಿದರು.

ಸಮಸ್ಯೆ ಬಗೆಹರಿಸುವುದಾಗಿ ಚುನಾ­ವಣೆ ಸಮಯದಲ್ಲಿ ಮತ ಕೇಳಲು ಬರುವ ಜನಪ್ರತಿನಿಧಿಗಳು ನಂತರ ಇತ್ತ ಸುಳಿಯುವುದಿಲ್ಲ. ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ  ಶಿವನಿ ಗ್ರಾಮಕ್ಕೆ ಇತ್ತೀಚೆಗೆ ಬಂದಿದ್ದ ಜಿಲ್ಲಾಧಿಕಾರಿ­ಗಳನ್ನು ಕೋರಿದ್ದರೂ ಪ್ರಯೋಜನ ಆಗಿಲ್ಲ.  ಒಂದೆರಡು ದಿನಗಳಲ್ಲಿ ನೀರು ಪೂರೈಸದಿದ್ದರೆ ಲೋಕಸಭಾ ಚುನಾ­ವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ನಂಜುಂಡಪ್ಪ, ಎರಡು ತಿಂಗಳಲ್ಲಿ 650 ಅಡಿ ಆಳದವರೆಗೆ ನಾಲ್ಕು ಕೊಳವೆ ಬಾವಿ ಕೊರೆಸಿದರೂ ನೀರು ಸಿಗದಿರು­ವುದು ಸಮಸ್ಯೆಗೆ ಕಾರಣವಾಗಿದೆ. ಸಮೀ­ಪದ ಬೇರೊಂದು ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಿ, ಅಲ್ಲಿಂದ ನೀರು ತರುವಂತೆ ತಾಲ್ಲೂಕು ತಹಶೀ­ಲ್ದಾರ್ ಹಾಗೂ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT