ನವದೆಹಲಿ: ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಸಮಾಜವಾದಿ ಪಕ್ಷವು ಸೋಮವಾರದ ಚುನಾವಣೆಗೆ ಭಂಗ ಉಂಟುಮಾಡುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿ ಬಿಜೆಪಿಯು ಚುನಾವಣೆ ಆಯೋಗಕ್ಕೆ ದೂರು ಬರೆದಿದೆ.
ಹಾಗೆಯೇ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಅಡ್ಡಿ ಎದುರಾಗಬಹುದೆಂದು ಸಿಪಿಐ ಆಯೋಗಕ್ಕೆ ದೂರು ನೀಡಿದೆ. ಈ ಎರಡೂ ಪಕ್ಷಗಳು ನಕಲಿ ಮತ ಚಲಾವಣೆ, ಮತಗಟ್ಟೆ ವಶ ಹಾಗೂ ಇನ್ನಿತರ ಅಕ್ರಮಗಳು ನಡೆಯಬಹುದೆಂದು ಭೀತಿ ವ್ಯಕ್ತಪಡಿಸಿವೆ.
ಸಂಭವನೀಯ ಚುನಾವಣಾ ಅಕ್ರಮ ತಡೆಗಟ್ಟುವ ಸಲುವಾಗಿ ವಿಶೇಷ ವೀಕ್ಷಕರನ್ನು ನಿಯೋಜಿಸುವ ಜತೆಗೆ ಹೆಚ್ಚಿನ ಬಿಗಿ ಭದ್ರತೆ ಒದಗಿಸಬೇಕು ಎಂದೂ ಆಯೋಗವನ್ನು ಒತ್ತಾಯಿಸಿವೆ.