ಕೆ ವಿ ಸುಬ್ಬಣ್ಣ ಆಪ್ತರಂಗಮಂದಿರ: ಛಾಯಾಗ್ರಾಹಕ ದಿ. ಎಸ್. ರಾಮಚಂದ್ರ ಸ್ಮರಣೆಯ ಚಿತ್ರವರ್ಷ ಕಾರ್ಯಕ್ರಮದಲ್ಲಿ ಶನಿವಾರ ಸಂಜೆ 6 ಮತ್ತು ಭಾನುವಾರ ಮಧ್ಯಾಹ್ನ 3.30ಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ‘ಚೋಮನ ದುಡಿ’ (ಮೂಲ ಕಥೆ: ಡಾ. ಶಿವರಾಮ ಕಾರಂತ. ನಿರ್ದೇಶನ: ಬಿ.ವಿ. ಕಾರಂತ. ಛಾಯಾಗ್ರಹಣ: ಎಸ್. ರಾಮಚಂದ್ರ. ತಾರಾಗಣದಲ್ಲಿ: ಎಂ.ವಿ. ವಾಸುದೇವರಾವ್, ಪದ್ಮಾ ಕುಮಟಾ, ಸುಂದರರಾಜ್ ಮತ್ತಿತರರು) ಚಿತ್ರ ಪ್ರದರ್ಶನ. ನಂತರ ಚಿತ್ರದ ಸಹಾಯಕ ನಿರ್ದೇಶಕರಾಗಿದ್ದ ಗಿರೀಶ್ ಕಾಸರವಳ್ಳಿ ಮತ್ತು ತಂಡದ
ಜತೆ ಸಂವಾದ.
ದಲಿತ ಸಮುದಾಯದ ಚೋಮನ ಯಾತನಾಮಯ ಬದುಕು, ಆತನ ಕುಟುಂಬದ ಮೇಲೆ ಸಮಾಜ ನಡೆಸುವ ಶೋಷಣೆ, ಆತನ ಈಡೇರದ ಕನಸುಗಳನ್ನು ಆಧರಿಸಿದೆ ಈ ಚಿತ್ರ.
ಸ್ಥಳ: ಕೆವಿಎಸ್ ಆಪ್ತರಂಗಮಂದಿರ, 151, 7ನೇ ಕ್ರಾಸ್, ಟೀಚರ್ಸ್ ಕಾಲೋನಿ, ದಯಾನಂದ ಸಾಗರ್ ಕಾಲೇಜು ಬಳಿ. ಕುಮಾರಸ್ವಾಮಿ ಬಡಾವಣೆ. ಮಾಹಿತಿಗೆ: ಬಿ.ಆರ್. ಗೋಪಿನಾಥ್ 92425 23523.