ಶಿಕ್ಷೆಗೆ ಗುರಿಯಾದ ಗಣ್ಯರ ಆಸ್ಪತ್ರೆ ವಾಸಕ್ಕೆ ಕಡಿವಾಣ: ‘ಸುಪ್ರೀಂ’ ಇಂಗಿತ
ಶಿಕ್ಷೆಗೆ ಗುರಿಯಾದ ಗಣ್ಯರು ಅನಾರೋಗ್ಯ ನೆಪದಿಂದ ಹೆಚ್ಚಿನ ಸಮಯ ಆಸ್ಪತ್ರೆಯಲ್ಲಿ ಕಳೆಯುವ ಪ್ರವೃತ್ತಿಯು ಇತ್ತಿಚೀನ ದಿನಗಳಲ್ಲಿ ಹೆಚ್ಚುತ್ತಿದೆ. ಇದು ‘ದೇಶದ ದುರಂತ’ ಎಂದಿರುವ ಸುಪ್ರೀಂ ಕೋರ್ಟ್, ಇಂತಹದಕ್ಕೆ ಕಡಿವಾಣ ಹಾಕುವ ಇಂಗಿತವನ್ನು ಬುಧವಾರ ವ್ಯಕ್ತಪಡಿಸಿದೆ.
ಭ್ರಷ್ಟಾಚಾರದ ಅಪರಾಧಕ್ಕಾಗಿ ಜೈಲು ಶಿಕ್ಷೆಗೆ ಗುರಿಯಾಗಿರುವ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲ ಅವರು ಅನಾರೋಗ್ಯದ ಕಾರಣ ನೀಡಿ ಶರಣಾಗಲು ನೀಡಿದ್ದ ಸಮಯಾವಕಾಶವನ್ನು ವಿಸ್ತರಿಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ನ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.