ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇದೇ 30 ರಿಂದ ನಡೆಯುವ ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಜಂಬು ಸವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರಿಗೆ ಜಿಲ್ಲಾಡಳಿತ ಆಹ್ವಾನಿಸಿದೆ.
ಬೆಂಗಳೂರಿನಲ್ಲಿ ಶಾಸಕ ಅಶ್ವತ್ಥನಾರಾಯಣ, ಎ.ಬಿ.ರಮೇಶ್ಬಾಬು, ಜಿಲ್ಲಾಧಿಕಾರಿ ಡಾ. ಜಾಫರ್ ಮತ್ತು ಅಧಿಕಾರಿಗಳಿದ್ದ ನಿಯೋಗ ಕಂಬಾರ ಅವರನ್ನು ಭೇಟಿ ಮಾಡಿ, ಸಾಂಪ್ರಾದಾಯಿಕವಾಗಿ ಆಹ್ವಾನಿಸಿತು.
ಜಂಬೂಸವಾರಿ ಉತ್ಸವಕ್ಕೆ ಚಾಲನೆ ನೀಡುವ ಸಂದರ್ಭದಲಿ ಜಿಲ್ಲಾಡಳಿತದ ಪರವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಯನ್ನು ಸಲ್ಲಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.
ದಸರಾ ಮಹೋತ್ಸವಕ್ಕೆ ಈಗಾಗಲೇ ಸಿದ್ಧತೆಗಳನ್ನು ಮಾಡಲಾಗಿದೆ. ಕಿರಂಗೂರು ಬನ್ನಿಮಂಟಪವನ್ನು ದುರಸ್ತಿ ಪಡಿಸಲಾಗಿದೆ. 30ರಂದು ಜಂಬೂಸವಾರಿ ಆರಂಭವಾಗಲಿದ್ದು, ಶ್ರೀರಂಗನಾಥ ಸ್ವಾಮಿ ದೇವಾಲಯದವರೆಗೆ ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ.