ಮಂಗಳವಾರ ರಾತ್ರಿ ಸುನಿಲ್ ಅವರನ್ನು ಬಂಧಿಸಲಾಗಿತ್ತು. ಅಪರಾಧ ಸಂಚಿಗೆ ಸಂಬಂಧಿಸಿದಂತೆ ಅವರು ಹಾಗೂ ಇನ್ನೊಬ್ಬ ಆರೋಪಿ ಕೊನೇರು ರೆಡ್ಡಿ ಅವರನ್ನು 15 ದಿನಗಳ ಕಾಲ ತನ್ನ ವಶಕ್ಕೆ ಒಪ್ಪಿಸುವಂತೆ ಸಿಬಿಐ ತನಿಖಾ ತಂಡ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ ಇದೇ ವೇಳೆ ಪ್ರತಿ ಅರ್ಜಿ ಸಲ್ಲಿಸಲು ಸುನಿಲ್ ವಕೀಲರು ಸಮಯಾವಕಾಶ ಕೋರಿದ್ದರಿಂದಾಗಿ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿ ಅವರನ್ನು ಚಂಚಲಗುಡ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.