ಹೈದರಾಬಾದ್ (ಪಿಟಿಐ): ವೈಎಸ್ಆರ್ ಕಾಂಗ್ರೆಸ್ ಮುಖಂಡ ಜಗನ್ ಮೋಹನ್ ರೆಡ್ಡಿ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಷರತ್ತುಬದ್ಧ ಜಾಮೀನು ನೀಡಿದೆ.
ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದೊಂದು ವರ್ಷದಿಂದ ಜಗನ್ ಜೈಲಿನಲ್ಲಿದ್ದರು. ಹೈದರಾಬಾದ್ ಬಿಟ್ಟು ತೆರಳದಿರುವಂತೆ ಮತ್ತು ಸಮನ್ಸ್ ನೀಡಿದಾಗ ನ್ಯಾಯಾಲಯಕ್ಕೆ ಹಾಜರಾಗಬೇಕೆಂಬ ಷರತ್ತುಬದ್ಧ ಜಾಮೀನು ನೀಡಿದೆ.