ಗ್ರಾಮೀಣ ಮಹಿಳೆಯರು ತಮ್ಮ ಆಸಕ್ತಿಯನ್ನು ನುಡಿಕಟ್ಟಿ ಹಾಡುವ ಪದ್ಧತಿ ಇಂದಿಗೂ ರೂಢಿಯಲ್ಲಿದೆ. ಜನನ, ಮರಣ ಹಾಗೂ ಮಕ್ಕಳ ಲಾಲನೆ, ಪಾಲನೆಗೆ ಸಂಬಂಧಿಸಿದ ಜನಪದ ಸೇರಿದಂತೆ ಸೂಬಾನ ಪದ, ಗರತಿಯರ ಹಾಡು, ಶರಣರ ನೀತಿ ತತ್ವಾಧಾರಿತ ಹಾಡುಗಳನ್ನು ಕಟ್ಟಿ ಆ ಮೂಲಕ ಬದುಕಿನ ರಸಗಳಿಗೆಗಳನ್ನು ಅನುಭವಿಸುತ್ತಿದ್ದಾರೆ.
ಉಪನ್ಯಾಸಕ ಜಿ.ಸಿ. ಜಂಪನ್ನವರ `ಪವಾಡ ರಹಸ್ಯ ಬಯಲು~ ಪ್ರದರ್ಶಿಸುವ ಮೂಲಕ ಜನರಲ್ಲಿ ತಪ್ಪು ಗ್ರಹಿಕೆಗಳನ್ನು ದೂರಗೊಳಿಸಿ, ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮೂಢನಂಭಿಕೆಗಳಿಗೆ ಮಾರುಹೋಗುವ ಜನರಿಗೆ ಎಚ್ಚರಿಕೆ ಮಾತುಗಳನ್ನು ನೀಡಿದರು.