ನವದೆಹಲಿ (ಪಿಟಿಐ): ಅಮೂಲಾಗ್ರ ಚುನಾವಣಾ ಸುಧಾರಣೆಗೆ ಅಣ್ಣಾ ತಂಡ ಒತ್ತಾಯಿಸುತ್ತಿರುವ ನಡುವೆಯೇ ಮುಖ್ಯ ಚುನಾವಣಾ ಆಯುಕ್ತ ಖುರೇಷಿ, `ಜನಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಳ್ಳುವ ಅಥವಾ ತಿರಸ್ಕರಿಸುವ ಹಕ್ಕಿನ~ ಪರ ವಹಿಸುವುದಿಲ್ಲ ಎಂದಿದ್ದಾರೆ. ಇಂತಹ ನಿಯಮ ರಾಷ್ಟ್ರವನ್ನು `ಅಸ್ಥಿರಗೊಳಿಸುತ್ತವೆ~ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.