ಐಗಳಿ (ತಾ. ಅಥಣಿ): ಕೊಕಟನೂರ ಯಲ್ಲಮ್ಮದೇವಿ ಜಾತ್ರೆ ಅಂಗವಾಗಿ ಮಂಗಳವಾರ ಜೋಡು ಕುದುರೆ ಓಡಿಸುವ ಸ್ಪರ್ಧೆ ನೋಡುಗರ ಗಮನ ಸೆಳೆಯಿತು. ಡಿಗ್ರಜದ ಮಧುಕರ ದೇಶಮುಖ ಅವರ ಕುದರೆಗಳು ಪ್ರಥಮ, ಶೇಡಬಾಳದ ಸಂಜಯ ನಾಯಿಕ ದ್ವಿತೀಯ, ಅವರವಾಡದ ಮಂಜೂರ ಮುಲ್ಲಾ ತೃತೀಯ ಹಾಗೂ ಶೇಡಬಾಳದ ಚಂದ್ರಕಾಂತ ನಂದಗಾಂವ ಅವರ ಜೋಡಿ ಕುದುರೆಗಳು ನಾಲ್ಕನೇ ಸ್ಥಾನ ಪಡೆದವು. ಸ್ಪರ್ಧೆಯಲ್ಲಿ 17 ಜೋಡಿ ಕುದುರೆಗಳು ಪಾಲ್ಗೊಂಡಿದ್ದವು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಹ್ಲಾದ ಪೂಜಾರಿ ಸ್ಪರ್ಧೆಗೆ ಚಾಲನೆ ನೀಡಿ, ರೈತರ ಒಡನಾಡಿಗಳಾದ ಎತ್ತು, ಕುದುರೆ ಗಾಡಿನ ಸ್ಪರ್ಧೆಗಳು ಇಂದು ಮರೆಯಾಗುತ್ತಿವೆ. ಗ್ರಾಮೀಣ ಪ್ರದೇಶದ ಹಬ್ಬ ಹರಿದಿನಗಳಲ್ಲಿ ಇಂತಹ ಸಾಹಸಮಯ ಸ್ಪರ್ಧೆಗಳು ನಡೆಯುತ್ತಿರುವುದು ಸಮಾಧನಕರ ಸಂಗತಿಯಾಗಿದೆ ಎಂದರು.
ನಮ್ಮ ಸಂಸ್ಕೃತಿಯ ಉಳಿವಿಗಾಗಿ ಗ್ರಾಮೀಣ ಕ್ರೀಡೆಗಳನ್ನು ಉಳಿಸಬೇಕಾಗಿದೆ. ನಮ್ಮತನ ಉಳಿಯಬೇಕಾದರೆ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವುದು ಅವಶ್ಯವಿದೆ. ಪ್ರಾಣಿಗಳ ಹಿಂಸೆ ಅಪರಾಧ, ಮೂಕ ಪ್ರಾಣಿಗಳ ಮೇಲೆ ದೌರ್ಜನ್ಯ ನಡೆಸದೇ ಅವುಗಳ ಸಾಮರ್ಥ್ಯದ ಅನುಗುಣವಾಗಿ ಓಡಿಸಬೇಕು ಎಂದು ಸಲಹೆ ನೀಡಿದರು.
ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಶ್ಯಾಮರಾವ್ ಪೂಜಾರಿ, ಜಾಯಪ್ಪ ದೇಸಾಯಿ, ಅರ್ಜುನ ಪೂಜಾರಿ, ಬಾಪುಗೌಡ ಭುಲಗೌಡರ, ಅರ್ಜುನ ಜಾಧವ, ಶಿವರುದ್ರ ಪರಾಂಡೆ, ಬಾಳಾಸಾಬ ಇಜಾರೆ, ಮಹಾವೀರ ಹಳಕಿ, ಕುಮಾರ ವೀರಗೌಡ, ಮಹೇಶ ಕಾಡದೇವರಮಠ, ಅಣ್ಣಾಸಾಬ ದೇಸಾಯಿ, ಪರಶುರಾಮ ಚಮಕೇರಿ, ಬಸಪ್ಪ ಅಂಬಾಜಿ ಉಪಸ್ಥಿತರಿದ್ದರು.