ಸಿಬಿಐ ಡಿ. 3ರಂದು ಸಲ್ಲಿಸಿರುವ ಆರೋಪಪಟ್ಟಿಯನ್ನು ರೆಡ್ಡಿದ್ವಯರು ಮತ್ತು ರಾಜಗೋಪಾಲರಿಗೆ ನೀಡಲಾಯಿತು. ಭದ್ರತೆಯ ಕಾರಣದಿಂದಾಗಿ ಕೆಲವು ತಿಂಗಳಿಂದ ರೆಡ್ಡಿದ್ವಯರನ್ನು ನ್ಯಾಯಾಲಯಕ್ಕೆ ಖುದ್ದು ಹಾಜರು ಪಡಿಸಿರಲಿಲ್ಲ. ಆದರೆ, ಅವರ ನ್ಯಾಯಾಂಗ ಬಂಧನದ ಅವಧಿಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಸ್ತರಿಸಲಾಗುತ್ತಿತ್ತು.
ಈ ಮಧ್ಯೆ, ಎಪಿಐಐಸಿ- ಎಮ್ಮಾರ್ ಟೌನ್ಶಿಪ್ ಯೋಜನೆ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಉದ್ಯಮಿ ಕೊನೇರು ರಾಜೇಂದ್ರ ಪ್ರಸಾದ್ ಅವರ ನ್ಯಾಯಾಂಗ ವನ್ನು ಜ. 25ರವರೆಗೆ ವಿಸ್ತರಿಸಲಾಗಿದೆ.