ಹೈದರಾಬಾದ್ ನ ಸಿಪಿಐ ಪಕ್ಷದ ಶಾಸಕ ಕೆ. ರಾಮಕೃಷ್ಣ ಅವರ ನೇತೃತ್ವದಲ್ಲಿ ಪ್ರತಿಭಟನಕಾರರು, ಇಲ್ಲಿಂದ 20 ಕಿ.ಮೀ ದೂರದ ಓಎಂಸಿ ಕಚೇರಿಗೆ ಸೇರಿದ ಮೂರು ಭದ್ರತಾ ಸಿಬ್ಬಂದಿಯ ಷೆಡ್ ಗಳನ್ನು ಕೆಡವಿ, ಜೊತೆಗೆ ಕಂಪೆನಿಯ ನಾಮಫಲಕಗಳನ್ನು ಕಿತ್ತೆಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಕಂಪೆನಿಯು ಪಕ್ಕದಲ್ಲಿನ ತಮ್ಮ ಜಮೀನುಗಳನ್ನು ಒತ್ತುವರಿ ಮಾಡಿದೆ ಎಂದು ರೈತರು ದೂರಿದರು ಎಂದು ಪೊಲೀಸರು ತಿಳಿಸಿದ್ದಾರೆ.