ಜಮ್ಮು (ಪಿಟಿಐ): ಬಾಬಾ ರಾಮ್ದೇವ್ ಮತ್ತು ಅವರ ಬೆಂಬಲಿಗರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡಿಸಿ ಬುಧವಾರ ಕರೆ ನೀಡಲಾಗಿದ್ದ ಜಮ್ಮು ಬಂದ್ ಭಾಗಶಃ ಯಶಸ್ವಿಯಾಗಿದೆ.
ಜಮ್ಮು ಮತ್ತು ಸುತ್ತಲಿನ ಪ್ರದೇಶದಲ್ಲಿ ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸಿದವು. ಆದರೆ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಸಂಚಾರ ದಟ್ಟಣೆ ತೀರ ಕಡಿಮೆ ಇತ್ತು.
ರಾಮ್ದೇವ್ ಅವರ ಪತಂಜಲಿ ಯೋಗ ಸಮಿತಿ ಕರೆ ನೀಡಿದ್ದ ಬಂದ್ಗೆ ಬಿಜೆಪಿ, ಪ್ಯಾಂಥರ್ಸ್ ಪಕ್ಷ ಸೇರಿದಂತೆ ರಾಜ್ಯದ ಕೆಲವು ಸಂಘಟನೆಗಳು ಬೆಂಬಲ ಸೂಚಿಸಿದ್ದವು.