ಭಾರತೀಯ ಸೇನಾದಳದ ಉತ್ತರ ವಲಯದ ಪಿರ್ ಪಂಜಾಲ್ ಬ್ರಿಗೇಡ್ ಈ ಪ್ರವಾಸವನ್ನು ಆಯೋಜಿಸಿದೆ.
ಅಹಮದಾಬಾದ್ ಮತ್ತು ಮುಂಬೈಗೂ ಭೇಟಿ ನೀಡಿರುವ ವಿದ್ಯಾರ್ಥಿನಿಯರು ರಾಜ್ಯಪಾಲ ಎಚ್. ಆರ್. ಭಾರದ್ವಾಜ್ ಅವರನ್ನು ಭೇಟಿ ಮಾಡಿದರು. ಭಾರತೀಯ ಸೇನೆಯ ಕರ್ನಾಟಕ ಮತ್ತು ಕೇರಳದ ಸಬ್ ಏರಿಯಾದ ಮೇಜರ್ ಜನರಲ್ ಎ.ಕೆ.ಪ್ರಧಾನ್, 106 ಇನ್ಫೆಂಟ್ರಿ ಬೆಟಾಲಿಯನ್ನ ಪ್ಯಾರಾಚ್ಚುಟ್ ದಳದ ತರಬೇತಿ ಕೇಂದ್ರ ಹಾಗೂ ಹಿಂದೂಸ್ತಾನ ಏರೋನಾಟಿಕ್ ಲಿಮಿಟೆಡ್ (ಎಚ್ಎಎಲ್)ನ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದರು. ನಾಳೆ ಬೆಂಗಳೂರಿನ ಕೆಲವು ಪ್ರವಾಸಿ ತಾಣಗಳಿಗೆ ಮತ್ತು ಐಟಿ ಕಂಪೆನಿ ಇನ್ಫೋಸಿಸ್ ಸಂಸ್ಥೆಗೆ ಸಹ ಅವರು ಭೇಟಿ ನೀಡಲಿದ್ದಾರೆ.