ವಿಚಾರಣೆ ನಡೆಸಿದ ರಾನ್ನಿ ನ್ಯಾಯಾಲಯ ಜಯಮಾಲಾ, ಜೋತಿಷಿ ಪಿ.ಉನ್ನಿ ಕೃಷ್ಣನ್ ಮತ್ತು ಅವರ ಸಹಾಯಕ ರಘುಪತಿ ಅವರಿಗೆ ಸಮನ್ಸ್ ನೀಡಿತ್ತು. ಕಳೆದ ಡಿಸೆಂಬರ್ನಲ್ಲಿ ರಾಜ್ಯ ಸರ್ಕಾರ ನೇಮಕ ಮಾಡಿದ್ದ ವಿಶೇಷ ತಂಡ ನಟಿಯ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆ ಹಿನ್ನೆಲೆಯಲ್ಲಿ ಕೆಳಹಂತದ ನ್ಯಾಯಾಲಯ ನಟಿ ಹಾಗೂ ಇತರ ಇಬ್ಬರ ವಿಚಾರಣೆಗೆ ಮುಂದಾಗಿತ್ತು.