ನದಿಯಲ್ಲಿ ಸ್ನಾನ ಮಾಡಿ ಶ್ವೇತ ವರ್ಣದ ಬಟ್ಟೆ ಧರಿಸಿದ್ದ ವಿಲಿಯಂ ಎಲ್ಲ ಕ್ರಿಯಾ ವಿಧಿಗಳನ್ನು ಪೂರೈಸಿದ ನಂತರ ಸ್ನೇಹಿತನಿಗೆ ತರ್ಪಣ ಬಿಟ್ಟು ಬಂದರು.
‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಹಂಪಿಗೆ ಐದು ಬಾರಿ ಭೇಟಿ ನೀಡಿದ್ದೇನೆ. ಇಲ್ಲಿಯ ಸಂಸ್ಕೃತಿ, ಸಂಪ್ರದಾಯ ತಿಳಿದುಕೊಂಡಿದ್ದೆ. ಸ್ನೇಹಿತನ ಆತ್ಮಕ್ಕೆ ಶಾಂತಿ ಕೋರಲು ಈ ಕಾರ್ಯ ಮಾಡಿದ್ದೇನೆ’ ಎಂದರು.