ನವದೆಹಲಿ (ಪಿಟಿಐ): ನೀರು ಹಂಚಿಕೆಯಂತಹ ಸೂಕ್ಷ್ಮ ವಿವಾದಗಳನ್ನು ರಾಜ್ಯಗಳು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಕೇಂದ್ರ ಸರ್ಕಾರವು ಶಾಶ್ವತ ವೇದಿಕೆಯೊಂದನ್ನು ರಚಿಸುವ ಪ್ರಸ್ತಾವ ಮುಂದಿಟ್ಟಿದೆ.
7 ವರ್ಷಗಳ ನಂತರ ಇದೇ ಮೊದಲ ಬಾರಿ ಬುಧವಾರ ನಡೆಯುತ್ತಿರುವ 14ನೇ ರಾಷ್ಟ್ರೀಯ ಜಲ ಸಂಪನ್ಮೂಲ ಹಾಗೂ ರಾಜ್ಯ ನೀರಾವರಿ ಸಚಿವರ ಸಮಾವೇಶದ ಕಾರ್ಯಸೂಚಿಯಲ್ಲಿ ಈ ಪ್ರಸ್ತಾವನೆ ಕೂಡ ಅಡಕವಾಗಿದೆ.