ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಪದ್ಧತಿ ವಿರುದ್ಧ ಹೋರಾಡಿದವರೇ ವಿಶ್ವಮಾನ್ಯರು

Last Updated 15 ಅಕ್ಟೋಬರ್ 2012, 5:55 IST
ಅಕ್ಷರ ಗಾತ್ರ

ಹಾಸನ: `ಬಾಹುಬಲಿ, ಬುದ್ಧ ಹಾಗೂ ಅಂಬೇಡ್ಕರ್ ವಿಶ್ವದ ನಾಯಕರು. ಹಿಂದೂ ಧರ್ಮದ ಹೆಸರಿನಲ್ಲಿ ಹೇರಿದ್ದ ಜಾತಿ ಪದ್ಧತಿ ಧಿಕ್ಕರಿಸಿ ವಿಶ್ವ ಮಾನವರಾದರು~ ಎಂದು ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ನುಡಿದರು.

ವಿವಿಧ ದಲಿತ ಸಂಘಟನೆಗಳು ಭಾನುವಾರ ಹಾಸನದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರಿಗೆ ಅಭಿನಂದನೆ ಹಾಗೂ ನುಡಿನಮನ ಸಮಾರಂಭದಲ್ಲಿ ಅವರು ಮಾತನಾಡಿದರು.

`ಬಾಹುಬಲಿ ಹಿಂದೂ ಧರ್ಮವನ್ನು ಧಿಕ್ಕರಿಸಿದ ಮೊದಲ ವ್ಯಕ್ತಿ. ಒಂದು ಶತಮಾನದ ನಂತರ ಬುದ್ಧ ಅದೇ ಕಾರ್ಯವನ್ನು ಮಾಡಿದ. ಅಂಬೇಡ್ಕರ್ ಅದನ್ನು ಇನ್ನೊಂದು ರೀತಿಯಲ್ಲಿ ಮಾಡಿದರು ಎಂದರು.

ಶಾಸಕ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, `ಕಾನೂನಿನಲ್ಲಿ ನುರಿತ ವ್ಯಕ್ತಿ ಎಂಬ ಕಾರಣಕ್ಕೆ ಅಂಬೇಡ್ಕರ್ ದೇಶದ ಮೊದಲ ಕಾನೂನು ಸಚಿವರಾದರೇ ವಿನಾ ದಲಿತ ಎಂಬ ಕಾರಣಕ್ಕೆ ಅಲ್ಲ~ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಜಿ.ಟಿ. ಇಂದಿರಾ, ಎಂ.ವಿ. ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಹೇಮಗಂಗೋತ್ರಿಯ ಉಪನ್ಯಾಸಕ ದೇವರಾಜ್, ವಿವಿಧ ಸಂಘಟನೆಗಳ ಮುಖಂಡರಾದ ದ್ಯಾವಪ್ಪ, ಬಿ.ಪಿ. ಜಯರಾಂ, ಎಚ್.ಕೆ. ಸಂದೇಶ್ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT