ಗ್ರಾಮೀಣ ಪ್ರದೇಶಗಳ ಪೂರ್ವಜರ ಪಳೆಯುಳಿಕೆಯಂತಿರುವ ಕಲ್ಲಿನ ಬಾವಿ, ಪಾಳು ಮಂಟಪ, ಅಶ್ವತ್ಥಕಟ್ಟೆ, ಕೊಳ, ಮಾಸ್ತಿಗಲ್ಲು, ವೀರಗಲ್ಲು, ಶಾಸನಗಳು ಮತ್ತು ಜೀರ್ಣಾವಸ್ಥೆ ತಲುಪುತ್ತಿರುವ ದೇವಾಲಯಗಳು ಸೂಕ್ತ ರಕ್ಷಣೆ ಇಲ್ಲದೆ ಒತ್ತುವರಿಗೆ ಒಳಪಟ್ಟು ಜನಪದ ಪರಂಪರೆ ನೆಲೆ ಕಳೆದುಕೊಳ್ಳುತ್ತಿದೆ.
ಅಳಿದುಳಿದಿರುವ ಜನಪದರ ಆಸ್ತಿಯನ್ನು ಉಳಿಸಿಕೊಳ್ಳುವ ಮಹತ್ತರ ಕಾರ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಅವುಗಳ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಲಿ.