ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಜಾನುವಾರುಗಳು ಬದುಕುವುದು ದುಸ್ತರವಾಗಿದೆ. ಸರ್ಕಾರದ ಗೋಶಾಲೆಗಳಲ್ಲಿ ಬರಡು ದನಗಳೊಂದಿಗೆ ಆಡಳಿತ ಹಾಗೂ ವಿರೋಧ ಪಕ್ಷದವರ ಮಿರಿಮಿರಿ ಮಿಂಚುವ ಚಿತ್ರಗಳನ್ನು ನಿತ್ಯ ನೋಡುತ್ತೇವೆ. ಆದರೆ ಎಲ್ಲಿಯೂ ಸಮರ್ಪಕವಾದ ಗೋಶಾಲೆಗಳಿಲ್ಲ. ಇದ್ದರೂ ಅಸಮರ್ಪಕ. ಮೂಕ ಪ್ರಾಣಿಗಳ ದಯನೀಯ ಸ್ಥಿತಿ ನೋಡಲಾಗದು. ಅದಕ್ಕೊಂದು ಪರಿಹಾರ ಹುಡುಕಬೇಕಾಗಿದೆ.