ಚಿತ್ರದುರ್ಗ: ಸಾಹಿತ್ಯ ವಲಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಹೊಳಲ್ಕೆರೆ ತಾಲ್ಲೂಕಿನ ಬಸಾಪುರ ಗ್ರಾಮದ ಜಿ. ಕುಮಾರಪ್ಪ ಬಸಾಪುರ (55 ) ಬುಧವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕೋಲ್ಕತ್ತದ ಬಂಗಾಲಿ ನ್ಯಾಷನಲ್ ಗ್ರಂಥಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. `ಧೀಮಂತ~ ಕವನ ಸಂಕಲನ ಹಾಗೂ `ಜಪಾನಿ ಹೈಕಗಳು~ ಕೃತಿ ರಚಿಸಿದ್ದರು. ಹಲವಾರು ಬೆಂಗಾಲಿ ಕೃತಿಗಳನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದರು.
ಅವರಿಗೆ ತಂದೆ, ತಾಯಿ ಹಾಗೂ ಪತ್ನಿ ಕೋಮಲಾ, ಪುತ್ರಿ ದಿವ್ಯಾ ಮತ್ತು ಇಬ್ಬರು ಸಹೋದರರು, ಸಹೋದರಿ ಇದ್ದಾರೆ. ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 11ಕ್ಕೆ ಬಸಾಪುರ ಗ್ರಾಮದಲ್ಲಿ ನಡೆಯಲಿದೆ.