‘ಕೇಳುವಿಕೆಯು ಭ್ರಷ್ಟಗೊಂಡಿರುವ ಈ ಹೊತ್ತಿನಲ್ಲಿ, ಕಾಣಿಸುವ ಮೂಲಕ ಕೇಳಿಸುವ ಗುಣ ಹೊಂದಿರುವ ಕೂಸರ್ ಕವಿತೆಗಳನ್ನು ಕನ್ನಡ ಬದುಕು, ಕಾವ್ಯ ಪರಂಪರೆ ಹಾಗೂ ಪ್ರತಿಭೆಯ ಬೇರುಗಳನ್ನು ಈ ಮಣ್ಣಿನಲ್ಲಿಯೇ ಇಳಿಬಿಟ್ಟಂತೆ ಕನ್ನಡೀಕರಿಸಿದ್ದಾರೆ’ ಎಂದು ವಿಶ್ಲೇಷಿಸಿದರು. ಕವಿ ಅಬ್ದುಲ್ ರಶೀದ್ ಅವರ ‘ನರಕದ ಕೆನ್ನಾಲಿಗೆಯಂತ ನಿನ್ನ ಬೆನ್ನುರಿ’ ಕವನ ಸಂಕಲನದ ಕುರಿತು ಕಥೆಗಾರ ಎಂ.ಎಸ್.ಶ್ರೀರಾಮ್ ಮಾತನಾಡಿ, ‘ಈ ಕವನಗಳಲ್ಲಿ ಮುಗ್ಧತೆ ಮತ್ತು ತುಂಟತನ ಏಕಪ್ರಕಾರವಾಗಿವೆ. ಯಾವುದೇ ಕಾಲಕ್ಕೂ ಸಲ್ಲಬಹು ದಾದ ಕವನಗಳು. ಯೌವ್ವನವನ್ನು ಕಾಪಾಡಿಕೊಳ್ಳುವ ಗುಣವು ಕಾಣುತ್ತದೆ’ ಎಂದರು.
ಎಚ್ಎಸ್ವಿ ಅವರ ‘ಮಕ್ಕಳಿಗಾಗಿ ಪಂಪ’ ಕೃತಿ ಕುರಿತು ವಿಮರ್ಶಕ ರಾಮಲಿಂಗಪ್ಪ ಟಿ. ಬೇಗೂರು, ‘ನೈತಿಕ ವಿವೇಕವನ್ನು ಇಟ್ಟುಕೊಂಡು ಸರಳವಾಗಿ ಕಡಿಮೆ ಪದಗಳಲ್ಲಿ ಮಕ್ಕಳಿಗೆ ಮುಟ್ಟುವಂತೆ ಪಂಪನನ್ನು ಪರಿಚಯಿಸಲಾಗಿದೆ’ ಎಂದು ಹೇಳಿದರು.